ಸ್ಪಂದನ - ಜನಸೇವಾ ಕೇಂದ್ರ
ಜಿಲ್ಲಾಧಿಕಾರಿಗಳ ಕಛೇರಿ ರಾಮನಗರ ಜಿಲ್ಲೆ

I). ಸಾರ್ವಜನಿಕ ಸೌಲಭ್ಯಕ್ಕಾಗಿ ಜಿಲ್ಲಾಡಳಿತವು ಎಲ್ಲಾ ಸರ್ಕಾರಿ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರೈಸುವ ಸದುದ್ದೇಶದಿಂದ ಏಕ ಗವಾಕ್ಷಿಸ್ಪಂದನ ಜನಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

II). ಕೇಂದ್ರದ ಮುಖಾಂತರ ಸಾರ್ವಜನಿಕರಿಗೆ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.( JSK draft, JSK work flow)

Model Application Forms cum checklist

1

ಅನುಕಂಪ ಆಧಾರದ ಮೇಲೆ ನೇಮಕಾತಿಗೆ ಸಂಬಂಧಿಸಿದ ಅರ್ಜಿ

2

ಪಿ.ಟಿ.ಸಿ.ಎಲ್ ಕಾಯ್ದೆ ಅಡಿಯಲ್ಲಿ ಭೂಮಿ ಮಾರಾಟ ಮಾಡಲು ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ.

3

ಪೆಟ್ರೋಲ್ ಬಂಕ್ಗಾಗಿ ನಿರಾಪೇಕ್ಷಣಾ ಪತ್ರ.

4

ದರಖಾಸ್ತು ಯೋಜನೆಯಲ್ಲಿ ಮಂಜೂರಾದ ಜಮೀನುಗಳನ್ನು ಮಾರಾಟ ಮಾಡಲು ಸಲ್ಲಿಸುವ ಪ್ರಸ್ತಾವನೆಗಳು

5

ಹೊಸದಾಗಿ ಬಂದೂಕು ಪರವಾನಗಿ ಪಡೆಯಲು

6

ಚಿತ್ರಮಂದಿರ ನಿರ್ಮಿಸಲು ನಿರಾಕ್ಷೇಪಣಾ ಪತ್ರ

7

ಹೊಸದಾಗಿ ಪಟಾಕಿ ಮಾರಾಟ ಮಾಡಲು ಪರವಾನಗಿ

8

ಜಮೀನು ಕೊಳ್ಳಲು ಅನುಮತಿ ಕೋರಿ ಕೆಎಲ್ಆರ್ ನಿಯಮ ೧೦೯ ಪ್ರಕಾರ ಅರ್ಜಿ

9

ಸಾಲ ತೀರಿಸುವ ಶಕ್ತಿ(ಸಾಲ್ವೆನ್ಸಿ) ದೃಢೀಕರಣ ಪತ್ರ

10

ಕಲ್ಲುಗಣಿಗಾರಿಕೆಗೆ ಅನುಮತಿ

11

ಭೂ ಪರಿವರ್ತನೆ

12

ಸಿಂಧುತ್ವ ಪ್ರಮಾಣ ಪತ್ರ

13

ಸರ್ಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಸೈನ್ಯದಲ್ಲಿರುವ ಅಧಿಕಾರಿ/ ನೌಕರರು ಸಲ್ಲಿಸಬೇಕಾದ ಅರ್ಜಿ

ಇವುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಕೇಂದ್ರದ ಮುಖಾಂತರ ಸಲ್ಲಿಸಬಹುದು.

III). ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಅವಶ್ಯಕತೆ ಇರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಲು ಚೆಕ್ ಲಿಸ್ಟ್ ಇದ್ದು ಅಂತಹ ದಾಖಾಲಾತಿ ಇರುವ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಹಾಗೂ ನಿಗದಿತ ಅವಧಿಯೊಳಗೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

IV). ಕಾರ್ಯಗಳಿಗಾಗಿ ಸರ್ಕಾರದಿಂದ ನಿಗದಿಯಾದ ಶುಲ್ಕವಿದ್ದರೆ ಮಾತ್ರ ಅದನ್ನು ಅರ್ಜಿದಾರರು ನೀಡಬೇಕಿದ್ದು ಹೊರತುಪಡಿಸಿ ಯೋಜನೆಯ ಸೌಲಭ್ಯ ಉಚಿತವಾಗಿ ನೀಡಲಾಗುತ್ತದೆ.
 

ಜಿಲ್ಲಾಧಿಕಾರಿಗಳು,
ರಾಮನಗರ ಜಿಲ್ಲೆ.
    Maintained by: Sr. Programmer, CMC, Ramamanagara. For more info Please contact: PGC, DC office, Ramanagara, Modified: 2/2/2009